ಕನ್ನಡ ಕವನಗಳು (ಕವಿತೆ ಮಾಸ್ಟರ್)

(  ಛತ್ರಿ 1)
-----------------
 ನಿನ್ನ ನೆನಪು
ಮತ್ತೆ ಶುರುವಾಗುತಿದೆ
ಎಂದೊ ಬದಿಗೆತ್ತಿ
ಇಟ್ಟ ನೆನಪು
ಮತ್ತೆ ಕಾಡತೊಡಗಿದೆ
ಬಿರು ಬಿಸಿಲಲು
ಬಿಡಿಸಿ ನೋಡದ
ನಿನ್ನ  ಮುಖವನು
ಇಂದು ತೆರೆದು
ನೋಡುವ ಹಾಗೆ ಮಾಡಿದೆ|

(  ಛತ್ರಿ 2)
-----------------
  ಅಂದೊಂದು
ಮೋಡದ ಮರೆಯಿಂದ
ಜಾರಿದ ಮಳೆ ಹನಿ
ನನ್ನ ಮೈ ಸೋಕಿದಾಗ
ನಿನ್ನನ್ನು ಬಿಟ್ಟು ಬಂದೆನಲ್ಲ
ಎಂಬ ಕೊರಗು ಕಾಡಿತು| 

(ಕೊಡೆ ಹಿಡಿಯುವ ಜೊತೆಗಾತಿ)
------------------------------------
  ನೀ ನು  ಇದ್ದರೆ ನನ್ನ ಕಾಯುತ್ತಿದ್ದೆ
ಇರಬೇಕು ನೀನು ನನ್ನ ಜೊತೆ
ಮಳೆಗಾಲದಲಿ ನನ್ನ ಬಿಟ್ಟು ಇರಲಾರದಂತೆ|

(ಬಾಲ್ಯದ ಮಳೆ)
----------------------
ಅದೊಂದು ನೀರಾಟ ಮಳೆ ಸೋಕುವ ಭಯವು ಇರಲಿಲ್ಲ. ಆವಾಗ ನನಗೆ ನಾನೆ ರಾಜ, ನನಗೆ ನಾನೆ ರಕ್ಷಕ.Prasad....

Featured Post

ನಿದ್ದೆ ಎಂಬ ಮದ್ದು

ನಿದ್ದೆ ಎಂಬ ಮದ್ದು ‘ಹಗಲು ಎಚ್ಚರ, ರಾತ್ರಿ ಗಡದ್ದಾಗಿ ನಿದ್ದೆ ಮಾಡಿದರೆ ಕೊರೊನಾ ಸದ್ದಿರೋಲ್ವಂತೆ’ ಸುದ್ದಿಸಾರ ಹೇಳಿದೆ. ‘ಹಾಳಾದ್ದು, ಮಧ್ಯಾಹ್ನ ನಿದ್ದೆ ತಡೆಯ...

Popular Post